Sunday 17 March 2024

ಸಿಂಹವೆಳಗು


ಧರೆ ಮುಗಿಲಿನ ಏಕ
ತೆರೆ ತೆರೆಗಳ ಹಬ್ಬಿ ತೇಲಿ ಬರುತಿದೆ
ಬೆಳಕು ನೋಡಿಲ್ಲಿ....

ಕಟ್ಟಿ ಕೆಂಪು ವಸ್ತ್ರವ
ಬುಟ್ಟಿಲಿ ಹೊತ್ತು ನೆಡೆದಿಹ ವೀರನ್ಯಾರೊ?
ಜ್ಯೋತಿದು ಕಾಣಿಲ್ಲಿ....

ಗೆಜ್ಜೆ ಸದ್ದಿನ ತಾಳದಿ
ಹೆಜ್ಜೆ ಹಾಕುತ ಮನಕುಣಿತಿದೆ ವೀರ ಖಡ್ಗಗಳ
ಸೊಲ್ಲು ಕೇಳಿಲ್ಲಿ .....

ಜ್ಯೋತಿಯ ರೂಪಕೆ
ಮಾರು ನಿಂತಿದೆ ಸೃಷ್ಟಿ ಕೈಯ್ಯ ಮುಗಿದು
ಧನ್ಯತೆಯ ತೋರಿಲ್ಲಿ.....

ನದಿಯೆ ಬಳುಕಿದೆ
ಬೆಟ್ಟವು ಬಾಗಿದೆ ಗಾಳಿಯೆ ಬೆದರಿದೆ
ಬೆಚ್ಚಿದ ಮೊಗದಲ್ಲಿ......

ಸುತ್ತಲು ಸಿಂಹವೆಳಗು
ಕತ್ತನು ಚಾಚಿ ಬಾಯ್ದೆರೆ ಕುಳಿತಿರೆ ಕಾವಲು
ಕತ್ತಲೆ ನಿನಗುಳಿವೆಲ್ಲಿ.....

✍️ ಸಂತೋಷ್ ನಾಗರತ್ನಮ್ಮಾರ


No comments:

Post a Comment

ಪುಷ್ಪಾಂಡಜಮುನಿ ಚರಿತ್ರೆ  [ಭಾಮಿನಿ ಯಲ್ಲಿ] ಕಿರಣ ಅರ್ಕನೆ ಗೀತೆ ಕೃಷ್ಣನು ಧರಣಿ ಧೇನಿಗೆ ಬೀಜ ವೃಕ್ಷನು  ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತ...