Sunday 17 March 2024

ಮೌನ ಸಂಪಿಗೆ

ದುರ್ಗದ ಕಲ್ಲಿನಕೋಟೆಯ🪨 ಆಳೆತ್ತರಕೆ ಹೆಡೆ ಚಾಚಿ ನಿಂತ ನಾಗರಹಾವಂತ ನೆರಳಲ್ಲಿ..... ವಿಷ್ಣುವರ್ಧನನ ಕುಡಿಮೀಸೆ ಕುವರ ಸಿದ್ದೇಶಿ ಸುಮ್ಮನೆ ನಿಂತಿದ್ದ...

ಅಲ್ಲಿಯೆ ಗಿಡದಲ್ಲಿ ಅರಳಿ ನಗುತಿದ್ದ ನಸುಗೆಂಪು ಸಂಪಿಗೆ ಹೂವ್ವೊಂದ ಕೈಲಿಡಿದು ಕೋಟೆ ಬಾಗಿಲಿಗೆ ಭುಜವೊರಗಿ....

ಕೋಟೆಯೆದುರು ಮದಕರಿಯ ಶೌರ್ಯ,ಓಬವ್ವನ ಗತವೆಲ್ಲ ಓದಲೆಂಬಂತೆ ನಿಂತಿರುವ ಮಹಾರಾಜ ಕಾಲೇಜು ಇವನನ್ನೆ ದಿಟ್ಟಿಸುತಿತ್ತು ಮೌನದಿ...

ಈ ದಿನ ಏಕೊ ಸಿದ್ದುಗೆ ಹೊಸತೆನಿಸಿತು ಅವನಿಗೆ ಪ್ರವೇಶ ದ್ವಾರ.....ಯಾರದೊ ಆಗಮನಕೆ ಕುಂಡದ ಹೂವಿಡು ನಿಂತಂತೆ.....

ಸಂಪಿಗೆಯ ವೃಕ್ಷದ ನೆರಳು ತಾನಿಂತ ನೆರಳಿಗೆ ಹೊತ್ತೇರಿದಂತೆ ಮೆಲ್ಲ ಮೆಲ್ಲನೆ ಬಂದು ಆವರಿಸುತಿತ್ತು ಅವನು ನಿಂತ ನೆಲದೆಡೆಗೆ.....

ಬೆರಗು ಗಣ್ಣಿನಲೆ ದಿಟ್ಟಿಸುತ ನಿಂತವಗೆ ಕೋಟೆ ಗೋಡೆ ಇದ್ದಕ್ಕಿದ್ದಂತೆ ಭುಜಬಿಡಿಸಿ ನೋಡಲ್ಲಿ ಎಂದಂತಾಗಿ .....ನೋಡಿದ ಎದುರಿಗೆಯೆ ಇದ್ದ ಕಾಲೇಜಿನ ಕಡೆಗೆ ತನ್ನ ಬೆರಗು ದಿಟ್ಟಿಯ ಕಿರಣವನು ಹಾಯಿಸತ....

ಮೌನ ಮಾತಿನಲೆ ನಗೆಮೌನದ ಚೆಲುವೆ ಯೊಬ್ಬಳ ಸ್ವಾಗತಿಸಿಕೊಂಡಿತು ಕಾಲೇಜು ದ್ವಾರ.....ಅಲ್ಲಿದೆ ನೋಡು ಹೊಸ ಪ್ರವೇಶ ಕಚೇರಿ ಹೋಗಿ ಬೇಗ ನನ್ನೊಳಗೆ ಕಲಿಕೆಗೆ ಸೇರಿ ರೆಕ್ಕೆಬಿಚ್ಚೆಂದು ಗುಬ್ಬಿಯ ಗೂಡಂತೆ ನಿಂತಿತ್ತು ಮೌನದೆ....

ಸಿದ್ದೇಶಿಗೆ ಎದೆಲೆಲ್ಲೊ ಪುಳಕ ಇದುವರೆಗೂ ನಾ ಕಂಡಿರದ ಸೊಬಗೊಂದು ಸುಳಿದಿರುವ ಖಾತರಿಯೆನಿಸಿ...ಅವಳು ಸಾಗಿ ಹೋದ ಹೆಜ್ಜೆಗಳ ಬಿಸಿ ಆರಗೊಡದೆ ಹಿಂದೆಯೆ ನೆಡದ ಆ ಹೢಜ್ಜೆಗಳ ನನ್ನ ವಿನಹ ಮತ್ತಾರು ತುಳಿಯ ಬಾರದೆಂದು....

ಇದ್ದಕ್ಕಿದ್ದಂತೆ ಎದೆ ಬಡಿತದ ಎದೆಗೆ ಮಂತ್ರವೊಂದು ಬಿದ್ದಂತಾಗಿ....ಒಳ ಪ್ರವೇಶಿಸಿದ ಗೆಳೆಯ ಸ್ವಾಮಿಯ ಜೊತೆಗೂಡಿ....ಪ್ರವೇಷ ರೂಂ ಬಾಗಿಲ ಮುಚ್ಚಿ ಕುಂತಿತ್ತು ಇರು ಇನ್ನೇನು ಬರುವ ಹೊತ್ತು ಎಂದು ಮೌನದಿ ಹೇಳುತ.....

ಪ್ರವೇಶ ದ್ವಾರ ಪಕ್ಕಕೆ ಬರುತಿರಲು ತಿರುವಿಗೆ ದುತ್ತನೆ ಎದುರಾದಳು ಪೋರಿ...ಬಸ್ಸಿಳಿದು ತರಾತುರಿಯಲ್ಲೆ ಹೊಸ ನೆಲ ಹೊಸ ಕಾಲೆಜೆಂಬ ದಿಗಿಲಿನಲ್ಲಿ ಬಂದ ಅವಳ ಉಸಿರಲ್ಲಿ ಏರಿಳಿತವಿತ್ತು.....ಇನ್ನೇನು ಬರುವ ಹೊತ್ತು ಫಣಿಮಾಮ್ ಅಡ್ಮಿಷನ್ ಕೊಡುತ್ತಾರೆಂದು ಒಂದಿಷ್ಟು ಕಾಳಜಿಯ ತೋರಿ ತಾಯೊಟ್ಟಿಗೆ ಬಂದಿದ್ದ ಆಕೆಗೆ .......

ಕಚೇರಿ ಎದುರಿದ್ದ ಬೆಂಚಿನ ಹಾಸ ತೋರಿ.....ತಾನು ಅಲ್ಲೆ ಇದ್ದ ಗೋಡೆಗಾಂತು ಮರೆಮಾಚಿ ಅವಳ ಅಂದಕೆ ಮಾರುಹೋಗಿ ನಿಂತು ಬಿಟ್ಟ...

ಬಚ್ಚಿಟ್ಟ ಕಾದು ಕುಳಿತ ಹರೆಯವೊಂದು ಮದಕರಿ ಕೋಟೆಯ ನೆತ್ತಿಗೆ ಏರಿ ಗರಿ ಬಿಚ್ಚಿ ಕೂಗಿ ನಿಂತಂತೆ... ಮುಂಜಾನೆಯ ಸಂಪಿಗೆಯೆ ಹೂವ್ವೆ ನನ್ನ ಸೇರಿದ್ದು ಇದಕೆಂಬಂತೆ...

ಈಗ ಅವನ ಕಣ್ಣಿನಲ್ಲಿ ಅವಳದೆ ರೂಪು ವನಪು ವಯ್ಯಾರ ಮನದ ಹಾಳೆಗೆ ಬರೆದು ಕೊಳ್ಳ ತೊಡಗಿತು.....

ನಿನ್ನ ಕರ್ಣಕುಂಡಲ
ನನ್ನ ಕರೆತಿದೆ ಪಿಸುಮಾತಿನಲಿ ತೂಗಿ
ನನ್ನುಸಿರ ಬಿಸಿಯಪ್ಪಿಗೆಗೆ
ಸಾಕ್ಷಿಗೆಂಬಂತೆ

ಸೆಳೆತಿವೆ ಕಣ್ಣುಗಳು
ನಗೆಯ ಬಾನಿಗೆ ಚಿಕ್ಕಿಗಳನೆ ಬಿರಿದಿಕ್ಕಿ
ನನ್ನ ಕರಿಕಪ್ಪ ಕತ್ತಲಿಗೆ
ಬೆಳಕ ದೀಪಗಳೆರಡ ಯಾರೊ ಹಚ್ಚಿಟ್ಟಂತೆ

ಕದಪ ಮೌನವು
ಮಾತಿನ ಮುತ್ತಿನ ಕಾಳ ಕುಟುಕಿಗೆಂದು
ಬಾಯಾರಿ ಬಂದು
ಕೂತಂತಿದೆ ಹಕ್ಕಿಯೊಂದು...
ಗುಲಾಬಿ ಗಿಡದಲ್ಲಿ

ನೀಳ ನಾಸಿಕದ ಹೊಳೆವ ನತ್ತು
ತುದಿಕೋಪದ ಹನಿಗಳನೆಲ್ಲ
ಹೆಕ್ಕಿ ಕುಡಿಯಲೆಂದು.....ಕಾಡು ಬಿಟ್ಟು ಧಣಿದು ಬಂದ
ಪುಟ್ಟ ರೆಕ್ಕೆ ಬಿಚ್ಚಿದ.....
ಗುಬ್ಬಿಯಂತೆ ಕುಳಿತಿದೆ

ಅಷ್ಟರಲ್ಲೆ ಭುಜಕ್ಕೆ ಕೈ ಹಾಕಿ ಯಾರೊ "ಏಯ್ ಸಿದ್ದು ಏನ್ ನೋಡುತ ನಿಂತಿ ಇಲ್ಲಿ ಅಷ್ಟೊಂತಿಂದ ಬಾ ಅಲ್ಲಿ ಲೈಬ್ರರಿ ರೂಂ ಹತ್ರ ಬಸಪ್ಪ ಪ್ರಿನ್ಸಪಾಲ್ ತಮ್ಮ ಅಕೌಂಟನ್ಯಾಗ ಬುಕ್ ತೆಗಿಸಿಟ್ಟು ಕರಿಯಾಕ ಹತ್ಯಾರ "
ಸ್ವಾಮಿಯ ಧ್ವನಿ ಬಿದ್ದದ್ದೆ ತಡ....

ಅಂದದ ರಾಶಿಯನ್ನೆಲ್ಲ ಅಲ್ಲೆ ಬಿಟ್ಟು ಓಡಿದ.ಆವಯ್ಯನ ಗದರಿಗೆ ಹೆದರಿ ಇಲಿ ಯಂತಾಗುವ ಅವನ ಕೆಚ್ಚನು ನೆನೆದು....

"ಭುಜಕ್ಕೆ ಕೈ ಹಾಕಿ.... ಎಷ್ಟೊತ್ತು ಬರಾಕ ತಗ ಸಹಿ ಮಾಡು ಈ ಬುಕ್ಕೆಲ್ಲ ಓದಿ ಬೇಗ ಮುಗಿಸಿ ನೋಟ್ಸ ಮಾಡ್ಕೊ " ಅಂದವರೆ ಅಡ್ಮೀಷನ್ಸ ಇದಾವೆ ಅನ್ನುತ ಫಣಿ ಬಂದ್ರ ಅನ್ನುತ್ತ.....ನೆಡೆದರು.

ಸಿದ್ದು ಮನದಲ್ಲೆ ಅಂದು ಕೊಂಡ ತಾಯಂತ ಲೆಕ್ಚರ್ ಸಿಕ್ಕಿದ್ದು ಪುಣ್ಯವೆಂದು ಮನದಲ್ಲೆ ಬಗೆದು ....

ಗಿರಿ ತಿಪ್ಪ ತನ್ನೆಲ್ಲ ಗೆಳೆಯರು ಲೈಬ್ರರಿಯಲ್ರಿ ಮಾತಾಡಿಸಿದರು ಮಾತಾಡದಂತೆ ಯಾವುದೊ ಗುಂಗಿಗೆ ಸಿದ್ದ ಕಳೆದು ಕೊಂಡಿದ್ದ.....

ಯಾಕೊ ಪ್ರಿನ್ಸಿಯ ಪ್ರಿನ್ಸ್ ಗೆ ಇವತ್ತು ಏನೊ ಆಗಿದೆ ಅನ್ನುತ್ತ ಅಲ್ಲಿಂದವನ ಗೆಳೆಯರೆಲ್ಲ ಎದ್ದು ರಾಜಶೇಖರ ಸರ್ ಕ್ಲಾಸ್ ತಗೊತಾರೆ ನಡಿರೆಂದು ಹೊರಟರು...."ಬಂದೆ ತಡಿರೊ" ಅನ್ನುತಿದ್ದ ಸಿದ್ದು ಇವತ್ತು ತನ್ನ ಮನದಲ್ಲಿ ಅಂದು ಕೊಂಡನೇನೊ ಅವರಿಗೆ ಕೇಳಿಸದಾಗಿ ಹೋದರು....

ಈಗ ಒಬ್ಬನೆ ಮೌನ ಮಡುಗಟ್ಟಿದ ಲೈಬ್ರಲಿ ಕುಳಿತಿದ್ದಾನೆ.ಬಗಲಲ್ಲಿ ಬುಕ್ಕ ಜೋಡಿಸಿ ಹಿಡಿದುಕೊಳ್ಳುವುದನ್ನು ಬಿಟ್ಟು...ಮಾಯ ಶಾರದೆಗೆ ಮನ ಸೋತಿದ್ದಾನೆ ಅವಳಂದದ ಬುಕ್ಕಿನಲ್ಲಿ ತಾನು ಅಕ್ಷರವಾಗಿ ನಿಲ್ಲ ಹೊಂಟು ಭಾವಲೇಖನಿ ತೆಗೆದು ಮನದಲ್ಲೇನೊ ಗೀಚುತಿದ್ದಾನೆ...

ಗಲ್ಲದ್ರಿ ಕಣಿವೆನಿಂತು
ಮೆಲ್ಲಮೆಲ್ಲಗೆ ಮುಳುಗುತ್ತಿರುವಂತಿದೆ
ಬಯಕೆಗಡಲು ಅಲೆಅಲೆಗಳ
ಮೊರೆತವಿಕ್ಕಿ ಒಳಗೊಳಗೆ ತೂಗುತಿರಲು

ಮೆಲ್ಲನೆ ಲೈಬ್ರರೀ ಹೊರಬಿದ್ದು ಆಫೀಸ್ ರೂಂ ಕಡೆಗೆ ಹೊಂಟ.ಸೂರ್ಯನೆರಚಿದ ಬಿಸಿಲಿಗೆ
ನೆರಳ ಹದ್ದೊಂದೂ ಬೇಟೆ ಹುಡುಕಿ ಸಾಗುವಂತೆ ಸಾಗುತಿತ್ತು.....

ಇನ್ನಾದರೂ ಪ್ರವೇಶ ಪಡೆಯದೆ ಅಲ್ಲೆಬೆಂಚಲ್ಲಿ  ಕೂತಿದ್ದರು ತಾಯಿ ಮಗಳು.ಅಡ್ಮೀಷನ್ ಮಾಡಿ ಪೀಜು ಕಟ್ಟಿದ ರಿಷಿಪ್ಟ ಪ್ರಿನ್ಸಿಯ ಸಹಿಗಿದ್ದದ್ದ ಕಾದು....ಸಿದ್ದು ತನು ತರಂಗಗಳು ಅವರಿದ್ದ ವ್ಯಾಪ್ತಿಗೆ ಹೋಗಲು ತಾಯಿ ಜೊತೆ ಕೂತಿದ್ದ ಆ ಹುಡುಗಿ ಇವನ ನೋಡುತಲೆ ಎದ್ದು ನಿಂತಳು....
ಪೀವೊನ್ ಕೊಟ್ಟ ರಿಷಿಪ್ಟು ಕೈ ಸೇರಿತಾಗ ಅದನ್ನ ತೋರಿ

"ರೀ...ರೀ...ರೀ....ಕ್ಲಾಸ್ ಯಾವ್ ರೂಂ ಯಾವ್ ಕಡೆ ಬರುತ್ತೆ ಇಂಗ್ಲಿಷ್ ಮೇಜರ್ ಅನ್ನುವ ಧ್ವನಿಗೆ ಕೋಟೆ ಕಲ್ಲಂತಿದ್ದವ ಕರಗಿ ನೀರಾಗಿ ,ನೀರ ವೇದವತಿ ನದಿಯಂತಾಗಿ ಸರಸರನೆ ಬನ್ನಿ ತೋರಿಸುತ್ತೆನೆ ಎಂದು "ತನ್ನ ಮೇಲೆ ಹರಿದಾಡಿ ಬರುವ ತೆಪ್ಪದಂತೆ ತಾನು ಸಹ ಅದೆ ಕ್ಸಾಸ್ ಗೆ ಹಾಜರಾದ ಹಸರು ತಿಳಿದಿರದ ಅವಳೊಟ್ಟಿಗೆ......

ಆಕೆ ತನ್ನ ತಾಯಿಗೆ ನೀ ಹೋಗೆಂದು ನಗೆಯಿಕ್ಕಿ ಸ್ಥೈರ್ಯದ ಹೋಗೆಂದು ನಿಂತು ಬಾಗಿಲಲ್ಲಿ ಒಬ್ಬರೊಬ್ಬರು ಅರಿಯದೆ ಆತ್ಮದ ಕೂಗೆಂಬಂತೆ ಒಟ್ಟು ಧ್ವನಿಲೆ "ಮೇ ಐ ಕಮಿನ್ ಸರ್  " ಅನ್ನಲು ರಾಜಶೇಖರ್ ಸರ್ ಎಸ್ ಅನ್ನಲು ಬಂದವರನ್ನೆ ದಿಟ್ಟಿಸಿ ನೋಡುತಿತ್ತು.....

ಇಡೀ ತರಗತಿಯೆ ಕಣ್ಣಲ್ಲೆ ಭಾಷ್ಯವನ್ನ ಮನದಲ್ಲೢ ಬರೢತಿತ್ತು ಮೆಲ್ಲಬರುವ ಅವರಿಬ್ಬರ ನಡಿಗೆಯ ಹೆಜ್ಜೆಗಳಿಗೆ .......

ಬಂದವನಿಗೆ ಸ್ವಾಮಿ "ಇಲ್ಲಿ ಬಾ ಎಂದು" ಪಕ್ಕ ಸಿದ್ದುನ ಕೂಡಿಸಿ ಕೊಂಡ.ಇದೇ ನೇರದಲ್ಲಿ ಅರುಣ ಒತ್ತಿ ಸರಿದು ಕೂರಿಸಿಕೊಂಡಳು ಜೊತೆಗೆ ಕ್ಸಾಸ್ ಒಳಗೆ ಬಂದ ಆಕೆಗೆ......

ಹಾಜರಿ ತಗೊಂಡಾಗಿದ್ದರೂ ಸಹ ಸಿದ್ದನ ಹಾಜರಿ ಹಾಕಿಕೊಂಡು ಅವಳತ್ತ ನೋಡಿ " ನ್ಯೂ ಅಡ್ಮಿಷನ್ನ ಏನಮ್ಮ ?ಹೆಸರೇನು ಅನ್ನಲು?" ತಕ್ಷಣವೆ ಸಿದ್ದುನ ಎದೆ ಕಿವಿನಿಮಿರಿ ದಂತಾಗಿ ಕಿವಿಗೆ ಬಿತ್ತು ಕೋಗಿಲೆಯಂತಹ ಮಧುರ ಧ್ವನಿಯಲಿ "ಹೆಸರು ಸಂಪಿಗೆ ಸರ್ "ಎಂದು ಕೂತು ನೋಟ್ಸ ತೆರೆದು ಪೆನ್ನಿಡುತ......[ಈ ಕಥೆಯ ನಾಯಕಿ].....

ಸಂಪಿಗೆಯ ಕಂಪಿನಲ್ಲೀಗಲೆ ಕರಗಿ ನದಿಯಾಗಿ ಹೊಳ ಹರಿದಿದ್ದ ಸಿದ್ದು ತಾನು ಮಾತ್ರ ಬರೆದು ಕೊಳ್ಳದೆ ಹೀಗೆ ಕ್ಲಾಸ್ ಕೇಳಿಸಿಕೊಳ್ಳುತ್ತೇನೆ ಎಂಬಂತೆ ಸರ್ ಕಣ್ಣತಪ್ಪಿಸಿ ತನ್ನನ್ನ ಆ ಕಡೆ ಸಾಲಿಗೆ ಕೂತ ಸಂಪಿಗೆಯನ್ನೆ ನೋಡುತ್ತ ಬರೆಯತೊಡಗಿದ ತನ್ನ ಮನದ ನೋಟ್ಸಿನ ಹಾಳೆಗಳಲ್ಲಿ.......

ನಿನ್ನ ತುಟಿ ದೋಣಿಯು
ಬರುವುದನೆ ಕಾದು ನಿಂತಿವೆ.......
ಮುಗುಚಿಕೊಳ್ಳಲು....ಬಿಳಿಚಿಕೊಳ್ಳಲು....
ಕುಳಿಗಲ್ಲದ ಕೊಳ್ಳದಲ್ಲಿ
ಮೆಲ್ಲಮೆಲ್ಲನೆ ದಾರಿಬಿಟ್ಟು ದೋಣಿ ಸಾಗಿಗೆಂಬಂತೆ....
ಲಂಗರೆಳೆಯುತಿದೆ....

ಕಪ್ಪು ಕುರುಳೆಲ್ಲ ಒಟ್ಟೢದ್ದು
ಹೆಪ್ಪುಗಟ್ಟಿನಿಂತಿರುವ ಹೆಡೆಯಂತೆ
ಮೊಗದಂದ ಚೆಂದನೆಲ್ಲ ಬಚ್ಚಿಟ್ಟುಕೊಳ್ಳುವ ಗುಹೆಯಂತೆ ಚಾಚಿ...
ನಿಂತಿದೆ ನಾಗಜಡೆಯು....

ಉಟ್ಟ ಸೀರಿಗೆ ಸೊಕ್ಕು ತುಂಬಿದೆ
ತಂಗಾಳಿಗಿಕ್ಕಿ ಮಾತಿಗಿಳಿದು
ಅಂದಕೆ ಕಾರಣ ನಾನೆಂದು ಸುಳ್ಳೢ ಬೀಗಿದೆ
ಕುಬುಸ ಬಿಲ್ಲಿಗೆ ಬಿಗಿದು ಗಾಳಿಯ ಬಾಣ
ಕೆಣಕಿದೆ ಚೆಲುವೆರಚಿ........

ಕುತ್ತಿಗೆಯ ಹೊತ್ತದ ಕಂಠಹಾರ
ನನ್ನ ತೋಳಾಗ ಬಾರದೆ
ಬಿಗಿದಪ್ಪುವ ಒಡವೆ ಗೊಡವೆಗಿಳಿತಿದೆ ಮನ
ಇಷ್ಟದಿನ ಎಲ್ಲಿತ್ತು ಈ ಮೌನ?
ಇಂದೇಕೆ ಸೆಳೆತಿದೆ ನನ್ನ........

ಕ್ಸಾಸ್ ಮುಗಿಸಿ ರಾಜಶೇಖರ್ ಸರ್ ಮಳೆ ನಿಂತ ಧರೆಮಾಡಿ ಕ್ಸಾಸ್ ರೂಂ ಹೋಗಿರಲು....ಚಟ್ಟನೆ ತಲೆಗೆ ಮೊಟುಕುತ ಸ್ವಾಮಿ ,......."ಏಯ್ ನಾನು ನೋಡುತ ಇದೀನಿ ಏನ್ ಒಂದೇ ಸಮನೆ‌ ಆ ಹುಡಿಗಿನ ನೋಡುತ ಇದೀಯ ? ",ಅನ್ನಲು ಇಲ್ಲೆಂಬಂತೆ ತಲೆಯಾಡಿಸತ ವಾಸ್ತವಕೆ ಬಂದನು.

"ನಡಿರೆಲ್ಲ ಕ್ಯಾಂಟೀನ ಟೀಗೆಂದು ಎಲ್ರರು ಎದ್ದರು ,ಸಿದ್ದು ಮಾತ್ರ ಎದ್ದೇಳದ ಬೇಡ ಅನ್ನುತ್ತಿದ್ದವನನ್ನು ಸ್ವಾಮಿ ಬಿಡದೆ ಜೊತೆಗೊಯ್ದ. ಗೆಳೆಯರೊಟ್ಟಿಗೆ ಟೀ ಕುಡಿತಿರಲು 

"ಕುಡಿಯೆಲೆಂದಿ ಹಿಡಿದ ಕಪ್ಪನ್ನೆ ಅವಳ ತುಟಿಯೆಂದು ಭ್ರಮಿಸಿ ನಾಲಗೆ ಸುಟ್ಟು ಕೊಂಡಿದ್ದು" ಮಾತ್ರ ಗೊತ್ತಾಗದೆ ಹರಟೆ ನಿಂತ.....ಮನಸ್ಸ ಹಕ್ಕಿ ಮಾತ್ರ ತರಗತಿಯ ಬೆಂಚಮೇಲೆ ಕುಳಿತು ಅವಳೊಂದಿಗೆ ಕಣ್ ಕಣ್ ಸಲಿಗೆಗೆ ಕಾಳ ಎದೆಗೆ ಹೆಕ್ಕಿಕೊಳ್ಳುತಿತ್ತು............

,*****""**🙏🙏🙏🙏🙏****""""
[ಪ್ರಪ್ರಥಮ ಯತ್ನ ,ನಾನೆಂದೂ ಇಂತಹ ಬರವಣಿಗೆಗೆ ಕೈ ಹಾಕಿದ್ದಿಲ್ಲ ಇಂದೇಕೊ ಬರೆಯ ಬೇಕೆನಿಸಿ ಬರೆಯುತಿದ್ದೇನೆ ತಪ್ಪೊ ಒಪ್ಪೊ ತಿಳಿಯದಾಗಿದೆ......ತಪ್ಪಿದಲ್ಲಿ ಸಿದ್ದನ ಗೆಳೆಯ (ತಿಪ್ಪೆ)ಸ್ವಾಮಿಯಂತೆ ಮೊಟಕದೆ ತಿಳಿಸಿ ಹೇಳಿ ದಯವಿಟ್ಟು ಸರಿ ಮಾಡಿ ಕೊಳ್ಳುತ್ತೆನೆ ....ಇಲ್ಲಿ ಅನನುಭವಿಯು ನಾನು ತಿಳಿದವರು,ಬೆಳೆದವರು,ಎದೆಗೆ ಉಳಿದವರು,ಮನವ ಮೆರೆವವರು ನೀವು ,,,,,ಈ ಪೀಲ್ಡಲ್ಲಿ ನಾನೊಂದು ತೃಣ ಮಾತ್ರ,,,,,,,,🙏🙏🙏🙏🙏🙏🙏✍️✍️

ಮುಂದುವರಿಸುತ್ತೇನೆ ನಿಮ್ಮ ಚಿಕ್ಕದೊಂದು ಸಹಕಾರದದೀಪ ಬೆಳಗು ಸಿಕ್ಕರೆ........

✍️ಸಂತೋಷ್ ನಾಗರತ್ನಮ್ಮಾರ

No comments:

Post a Comment

ಪುಷ್ಪಾಂಡಜಮುನಿ ಚರಿತ್ರೆ  [ಭಾಮಿನಿ ಯಲ್ಲಿ] ಕಿರಣ ಅರ್ಕನೆ ಗೀತೆ ಕೃಷ್ಣನು ಧರಣಿ ಧೇನಿಗೆ ಬೀಜ ವೃಕ್ಷನು  ಬೆರಗಿಗಿಟ್ಟದು ಕೋಟಿ ಸಂಕುಲ ಪೊರೆವ ವಿಷ್ಣುವು ತ...